ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ

ದಿನಾಂಕ 25/05/2022ರಂದು ನಾಪೋಕ್ಲು ಬಳಿಯ ಬಾವಲಿ ಗ್ರಾಮದಲ್ಲಿ ಕೆ.ಎಂ.ಕಾವೇರಪ್ಪ ಎಂಬವರು ಅವರ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ನಾಪೋಕ್ಲು ಠಾಣೆಯ ಪಿಎಸ್‌ಐ ಸದಾಶಿವರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಆರೋಪಿ ಕಾವೇರಪ್ಪನವರು ಅವರ ಅಂಗಡಿಯಲ್ಲಿ ವಿವಿಧ ರೀತಿಯ ಮದ್ಯದ ಟೆಟ್ರಾ ಪ್ಯಾಕೆಟುಗಳನ್ನು ಅಂಗಡಿಯಲ್ಲಿಟ್ಟುಕೊಂಡು ಸರ್ಕಾರದ ಪರವಾನಗಿ ಇಲ್ಲದೆ ಗ್ರಾಹಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದು ಕಂಡು ಬಂದಿದ್ದು ಮದ್ಯವನ್ನು ವಶಪಡಿಸಿಕೊಂಡು ನಾಪೋಕ್ಲು ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

ರಸ್ತೆ ಅಪಘಾತ

ದಿನಾಂಕ 25/05/2022ರಂದು ಕುಶಾಲನಗರ ಬಳಿಯ ಕೂಡಿಗೆ ಗ್ರಾಮದಲ್ಲಿ ಕುಶಾಲನಗರ ಸಂಚಾರಿ ಠಾಣೆಯ ಪಿಎಸ್‌ಐರವರು ವಾಹನ ಪರಿಶೀಲನೆ ಮಾಡುತ್ತಿರುವಾಗ ಒಂದು ಕಾರನ್ನು ಅದರ ಚಾಲಕ 6ನೇ ಹೊಸಕೋಟೆಯ ವೆಂಕಟೇಶ್‌ ಎಂಬಾತನು ಚಾಲಿಸಿಕೊಂಡು ಬರುತ್ತಿದ್ದು ಅದನ್ನು ನಿಲ್ಲಿಸುವಂತೆ ಸನ್ನೆ ಮಾಡಿದರೂ ಕಾರನ್ನು ನಿಲ್ಲಿಸದೆ ಹೋಗಿದ್ದು ಮುಂದೆ ಹಾರಂಗಿ ಸೇತುವೆಯ ಬಳಿ ಇದ್ದ ಪೊಲೀಸ್‌ ಸಿಬ್ಬಂದಿ ಶಶಿಕುಮಾರ್‌ರವರು ಕಾರನ್ನು ನಿಲ್ಲಿಸಿ ಕಾರಿನ ಬಳಿ ಹೋಗುತ್ತಿರುವಾಗ ಚಾಲಕ ವೆಂಕಟೇಶ್‌ ಕಾರನ್ನು ಏಕಾ ಏಕಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋದ ಪರಿಣಾಮ ಕಾರು ರಸ್ತೆ ನಡುವೆ ಇದ್ದ ವಿಭಜಕಕ್ಕೆ ಡಿಕ್ಕಿಯಾಗಿ ಕಾರನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

 

ಬೆಂಕಿ ಹಚ್ಚಿ ಕಾರಿಗೆ ಹಾನಿ

ಕುಶಾಲನಗರ ಬಳಿಯ ತೊರೆನೂರು ನಿವಾಸಿ ಹನುಮಯ್ಯ ಎಂಬವರು ಅವರ ಮಾರುತಿ ಓಮಿನಿ ವ್ಯಾನನ್ನು ದಿನಾಂಕ 24/05/2022ರಂದು ರಾತ್ರಿ ವೇಳೆ ಮನೆಯ ಮುಂದೆ ನಿಲ್ಲಿಸಿದ್ದು ಬೆಳಗಿನ ಜಾವ ಮನೆಯ ಹೊರಗಡೆ ಏನೋ ಸದ್ದು ಕೇಳುತ್ತಿರುವುದಾಗಿ ಹೊರಗೆ ಹೋಗಿ ನೋಡಿದಾಗ ವ್ಯಾನಿಗೆ ಬೆಂಕಿ ಹತ್ತಿ ಉರಿಯುತ್ತಿದ್ದು ಯಾರೋ ದುಷ್ಕರ್ಮಿಗಳು ವ್ಯಾನಿಗೆ ರಾತ್ರಿ ವೇಳೆ ಬೆಂಕಿ ಹಚ್ಚಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 25/05/2022ರಂದು ಪೊನ್ನಂಪೇಟೆ ಬಳಿಉಯ ಕೋಟೂರು ನಿವಾಸಿ ಅಜ್ಜಮಾಡ ಪೂವಯ್ಯ ಎಂಬವರು ಅವರ ಕುಟುಂಬದೊಂದಿಗೆ ಅವರ ಜೀಪಿನಲ್ಲಿ ಗೋಣಿಕೊಪ್ಪದಿಂದ ಅವರ ಮನೆಗೆ ಹೋಗುತ್ತಿರುವಾಗ ಕೋಟೂರು ಮುಖ್ಯ ರಸ್ತೆಯಲ್ಲಿ ಎದುರಿನಿಂದ ಒಂದು ಸ್ಕಾರ್ಪಿಯೋ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪೂವಯ್ಯನವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಪೂವಯ್ಯ ಮತ್ತು ಅವರ ಪತ್ನಿ ಮೀನಾಕ್ಷಿಯವರಿಗೆ ಗಾಯಗಳಾಗಿರುವುದಾಗಿ ಪೂವಯ್ಯನವರು ದೂರು ನೀಡಿದ್ದು ಅದೇ ರೀತಿ ಸ್ಕಾರ್ಪಿಯೋ ಕಾರಿನ ಚಾಲಕ ಶ್ರೀಮಂಗಲ ಬಳಿಯ ಬಲ್ಯಮುಂಡೂರು ಗ್ರಾಮದ ನಿವಾಸಿ ಸುಮನ್‌ ಎಂಬವರು ಪೊನ್ನಂಪೇಟೆ ಕಡೆಗೆ ಹೋಗುತ್ತಿರುವಾಗ ಪೂವಯ್ಯನವರು ಅವರ ಜೀಪನ್ನು ಅತಿ ವೇಗವಾಗಿ ಚಾಲಿಸಿಕೊಂಡು ಬಂದು ಸುಮನ್‌ರವರ ಕಾರಿಗೆ ಡಿಕ್ಕಿಪಡಿಸಿರುವುದಾಗಿ ಪ್ರತಿ ದೂರು ನೀಡಿದ್ದು ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಎರಡೂ ದೂರುಗಳನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

ಪರಸ್ಪರ ಹಲ್ಲೆ ಪ್ರಕರಣ

ದಿನಾಂಕ 25/05/2022ರಂದು ಗೋಣಿಕೊಪ್ಪ ನಗರದ ಒಂದನೇ ವಿಭಾಗದ ನಿವಾಸಿ ಮೈಲಾರಪ್ಪ ಎಂಬವರಿಗೆ ಅವರ ತಮ್ಮ ಮಂಜು ಹಾಗೂ ಇನ್ನಿತರರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕ್ರಿಕೆಟ್‌ ಬ್ಯಾಟಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ಮೈಲಾರಪ್ಪನವರು ದೂರು ನೀಡಿದ್ದು ಅದೇ ರೀತಿ ಮೈಲಾರಪ್ಪ ಹಾಗೂ ಇತರರು ಸೇರಿಕೊಂಡು ಮಂಜುರವರ ಮೇಲೆ ಹಲ್ಲೆ ಮಾಡಿರುವುದಾಗಿ ಮಂಜುರವರು ದೂರು ನೀಡಿದ್ದು ಗೋಣಿಕೊಪ್ಪ ಠಾಣೆಯಲ್ಲಿ ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 26-05-2022 04:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080