ಅಭಿಪ್ರಾಯ / ಸಲಹೆಗಳು

ಲಾರಿ ಉರುಳಿ ಕಾರ್ಮಿಕರ ಸಾವು

ದಿನಾಂಕ 17/07/2021ರಂದು ಚೇರಂಬಾಣೆ ಸಮೀಪ ಪಾಕ ದೇವಸ್ಥಾನಕ್ಕೆ ಹೋಗು ರಸ್ತೆಯಲ್ಲಿ ಕುಸಿದ ಬರೆಗೆ ತಡೆಗೋಡ ಕಟ್ಟುತ್ತಿರುವಾಗ ಅದಕ್ಕೆ ತುಂಬಿಸಲೆಂದು ಸಿಮೆಂಟ್‌ ಕಾಂಕ್ರೀಟನ್ನು ತುಂಬಿದ ಲಾರಿಯೊಂದು ಬಂದಿದ್ದು ಲಾರಿಯನ್ನು ಅದರ ಚಾಲಕ ಪ್ರಶಾಂತ್‌ ಎಂಬಾತನು ಕಾಂಕ್ರೀಟ್‌ ಮಿಕ್ಸರ್‌ ಲಾರಿಯನ್ನು ನಿರ್ಲಕ್ಷ್ಯತನದಿಂದ ಹಿಮ್ಮುಖವಾಗಿ ಚಾಲಿಸಿದ ಪರಿಣಾಮ ಲಾರಿ ಕುಸಿದ ಬರೆಯಲ್ಲಿ ಉರುಳಿ ಬಿದ್ದಿದ್ದು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಸಂತೋಷ್‌ ಹಾಗೂ ಪ್ರವೀಣ್‌ ಎಂಬವರುಗಳು ಲಾರಿಯಡಿ ಸಿಲುಕಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 16/07/2021ರಂದು ಕುಶಾಲನಗರ ಬಳಿಯ ಕೂಡ್ಲೂರು ನಿವಾಸಿ ಸಂತೋಷ್‌ ಎಂಬವರು ಅವರ ಬೈಲಿನಲ್ಲಿ ಮನೆಗೆ ಹೋಗುತ್ತಿರುವಾಗ ಎದುರಿನಿಂದ ಒಂದು ಬೈಕನ್ನು ಅದರ ಸವಾರ ಮಂಜೇಗೌಡ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಂತೋಷ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸಂತೋಷ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 17/07/2021ರಂದು ಶನಿವಾರಸಂತೆ ಬಳಿಯ ಅರೇಹಳ್ಳಿ ನಿವಾಸಿ ಮಮತಾ ಎಂಬವರು ಗದ್ದೆಯಲ್ಲಿ ಕಾರ್ಮಿಕರೊಂದಿಗೆ ಕೆಲಸಮಾಡಿಕೊಂಡಿರುವಾಗ ಕೂಡ್ಲೂರು ಗ್ರಾಮದ ಆನಂದ್‌, ತೇಜಾವತಿ ಮ್ತು ಚೇತನ್‌ ಎಂಬವರು ಬಂದು ಮಮತಾರವರ ಗದ್ದೆಯಲ್ಲಿ ಕಂಬ ನೆಟ್ಟು ಬೇಲಿ ಹಾಕುತ್ತಿದ್ದುದನ್ನು ವಿಚಾರಿಸಿದ ಕಾರಣಕ್ಕೆ ಆನಂದ, ತೇಜಾವತಿ ಮತ್ತು ಚೇತನ್‌ರವರು ಸೇರಿಕೊಂಡು ಮಮತಾರವರ ಮೇಲೆ ಕಬ್ಬಿಣದ ರಾಡಿನಿಂದ ಮತ್ತು ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕೋವಿಡ್‌ – ೧೯ ನಿಯಮ ಉಲ್ಲಂಘನೆ ಪ್ರಕರಣ ದಾಖಲು

ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಅಭ್ಯತ್‌ಮಂಗಲ ನಿವಾಸಿ ಮಂಜು ಎಂಬವರು ಅವರಿಗೆ ಕೋವಿಡ್-19‌ ಪಾಸಿಟಿವ್‌ ಬಂದಿದ್ದು ಅವರ ಮನೆಯನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಮಾಡಿದ್ದರೂ ಸಹ ಮಂಜುರವರು ಕೋವಿಡ್-19ರ ನಿಯಮಗಳನ್ನು ಉಲ್ಲಂಘಿಸಿ ಮನೆಯನ್ನು ತೊರೆದು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕೋವಿಡ್‌ – ೧೯ ನಿಯಮ ಉಲ್ಲಂಘನೆ ಪ್ರಕರಣ ದಾಖಲು

ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಅಭ್ಯತ್‌ಮಂಗಲದಲ್ಲಿ ಹೆಚ್ಚಿನ ಮಟ್ಟದ ಕೋವಿಡ್‌ ಪ್ರಕರಣಗಳಿರುವುದರಿಂದ  ಅಭ್ಯತ್ಮಂಗಲ ಪೈಸಾರಿಯನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಮಾಡಿದ್ದರೂ ಸಹ ಅಲ್ಲಿನ ನಿವಾಸಿ ಭರತ್‌ ಎಂಬವರು  ಕೋವಿಡ್-19ರ ನಿಯಮಗಳನ್ನು ಉಲ್ಲಂಘಿಸಿ ಕಂಟೈನ್‌ಮೆಂಟ್‌ ವಲಯವನ್ನು ಪ್ರವೇಶಿಸಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 18-07-2021 12:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080