ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ

ದಿನಾಂಕ 23/12/2020ರಂದು ಮಡಿಕೇರಿ ಬಳಿಯ ಕಡಗದಾಳು ನಿವಾಸಿ ಅರ್ಪಿತ ಎಂಬವರು ಅವರ ಸ್ಕೂಟರಿನಲ್ಲಿ ಕಡಗದಾಳುವಿಗೆ ಹೋಗುತ್ತಿರುವಾಗ ದಾರಿ ಮಧ್ಯೆ ನೀರುಕೊಲ್ಲಿ ಎಂಬಲ್ಲಿ ಮಳೆ ಬಂದ ಕಾರಣ ಸ್ಕೂಟರ್‌ ನಿಲ್ಲಿಸಿ ಮಳೆ ಕೋಟನ್ನು ಹಾಕುತ್ತಿರುವಾಗ ಮಡಿಕೇರಿ ಕಡೆಯಿಂದ ಒಂದು ಮಾರುತಿ ಓಮ್ನಿ ವ್ಯಾನನ್ನು ಅದರ ಚಾಲಕ ಗಣಪತಿ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅರ್ಪಿತರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರಿಗೆ ಹಾನಿಯಾಗಿ ಅರ್ಪಿತರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 24/12/2020ರಂದು ಅಮ್ಮತ್ತಿ ಬಳಿ ಇರುವ ಪುಲಿಯೇರಿ ಗ್ರಾಮದ ಇಂಜಿಲಗೆರೆಯ ನಿವಾಸಿ ಬಿ.ಎ.ಕುಟ್ಟಪ್ಪ ಎಂಬವರ ಕಾಫಿ ತೋಟಕ್ಕೆ ವಿಶ್ವವಿದಾನಂದ ಸ್ವಾಮೀಜಿ, ಬಸಪ್ಪ, ವಿನೋದ್‌ ಎಂಬವರು ಹಾಗೂ ಇನ್ನಿತರರು ಸೇರಿಕೊಂಡು ಅಕ್ರಮ ಪ್ರವೇಶ ಮಾಡಿ ಕಾಫಿ ಕುಯ್ಯುತ್ತಿದ್ದುದನ್ನು ಕಂಡು ಕುಟ್ಟಪ್ಪ ಮತ್ತು ಅವರ ಪತ್ನಿ ಮಕ್ಕಳು ಹೋಗಿ ಆಕ್ಷೇಪಿಸಿದಾಗ ಅವರುಗಳು ಕುಟ್ಟಪ್ಪ, ಅವರ ಮಗ ನಿಖಿಲ್‌ ಸೋಮಯ್ಯ ಮತ್ತು ಕುಟ್ಟಪ್ಪನವರ ಪತ್ನಿ ಪ್ರಿಯಾ ಹಾಗೂ ಬಿ.ಕೆ.ಬೋಪಣ್ಣ ಎಂಬವರ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಜೆ.ಕೆ.ಬಸಪ್ಪನವರು ಕಾರ್ಮಿಕರೊಂದಿಗೆ ಕಾಫಿ ಕುಯ್ಯುತ್ತಿರುವಾಗ ಬಿ.ಎ. ಕುಟ್ಟಪ್ಪ ಮತ್ತು ಇನ್ನಿತರರು ಸೇರಿಕೊಂಡು ಬಸಪ್ಪನವರ ವಾಹನಕ್ಕೆ ಹಾನಿಯುಂಟು ಮಾಡಿ ಬಂದೂಕು, ಕತ್ತಿ ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ಸಿದ್ದಾಪುರ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಾಡಾನೆ ದಾಳಿ, ಅರಣ್ಯ ವೀಕ್ಷಕ ಸಾವು

ದಿನಾಂಕ 24/12/2020 ರಂದು ನಾಗರಹೊಳೆ ಅಭಯಾರಣ್ಯದ ದೊಡ್ಡಹಳ್ಳ ಎಂಬಲ್ಲಿ ಅರಣ್ಯ ವೀಕ್ಷಕ ಗುರುರಾಜು ಮತ್ತು ಇತರ ದಿನಗೂಲಿ ನೌಕರರು ನೇರಳೆಕಟ್ಟೆ ಬಳಿ ಅರಣ್ಯ ಗಸ್ತು ಹೋಗುತ್ತಿದ್ದಾಗ ಒಂದು ಕಾಡಾನೆಯು ದಾಳಿ ಮಾಡಿದ ಪರಿಣಾಮ ದಾಳಿಗೆ ಸಿಕ್ಕಿದ ಅರಣ್ಯ ವೀಕ್ಷಕ ಗುರುರಾಜುರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 24/12/2020ರಂದು ಪೊನ್ನಂಪೇಟೆ ನಿವಾಸಿ ವಿ.ಎನ್.ನಾಗರಾಜು ಎಂಬವರು ಅವರ ಬೈಕಿನಲ್ಲಿ ಕೋತೂರಿನಿಂದ ಪೊನ್ನಂಪೇಟೆಗೆ ಹೋಗುತ್ತಿರುವಾಗ ಮುಗುಟಗೇರಿ ಬಳಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಪೆಮ್ಮಂಡ ಬೋಪಣ್ಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾಗರಾಜುರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ನಾಗರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 24/12/2020ರಂದು ಶನಿವಾರಸಂತೆ ಬಳಿಯ ಹೆಮ್ಮನೆ ನಿವಾಸಿ ನಯಾಜುದ್ದೀನ್‌ ಮತ್ತು ಅವರ ಸ್ನೇಹಿತ ಚಂದ್ರು ಎಂಬವರು ಗೂಡ್ಸ್‌ ರಿಕ್ಷಾದಲ್ಲಿ ಹೋಗುತ್ತಿರುವಾಗ ಗೋಪಾಲಪುರ ಬಳಿ ಮಾದೇಗೋಡಿನ ಸೂರಿ ಮತ್ತು ಅಶೋಕ ಎಂಬವರು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ನಯಾಜುದ್ದೀನ್‌ ಮತ್ತು ಚಂದ್ರುರವರಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಇತ್ತೀಚಿನ ನವೀಕರಣ​ : 25-12-2020 11:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080