Feedback / Suggestions

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ

    ಮಡಿಕೇರಿ ನಗರ ಠಾಣಾ ಸರಹದ್ದಿನ ಪುಟಾಣಿನಗರದ ನಿವಾಸಿ ವೇಣುಗೋಪಾಲ್ ಎಂಬವರು ದಿನಾಂಕ 24-10-2020 ರಂದು  ತಮ್ಮ ಮನೆಯ ಬಳಿ ರಸ್ತೆಯ ಬದಿಯಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ತೊಳೆಯುತ್ತಿದ್ದ ಸಂದರ್ಭದಲ್ಲಿ ಸತ್ಯ ಎಂಬವರು ಸ್ವಿಪ್ಟ್ ಕಾರಿನಲ್ಲಿ ಬಂದು ವೇಣುಗೋಪಾಲ್  ರವರ ಕಾರಿಗೆ ಡಿಕ್ಕಿಪಡಿಸಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಗಾಯಪಡಿಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಚಾಲಕನ ಮೇಲೆ ಹಲ್ಲೆಮಾಡಿ ಹಣ ಸುಲಿಗೆ.

    ದಿನಾಂಕ  24-10-2020 ರಂದು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಬಿ. ರಾಜಶೇಖರ ಹಾಗು ನಿರ್ವಾಹಕ ಹೆಚ್.ಎಂ. ಯೋಗೇಶ್ ರವರು ಸಂಜೆ ಕರ್ತವ್ಯದಲ್ಲಿದ್ದು ಬಸ್ಸು ಕರಿಕೆ ಗ್ರಾಮದ ಎಳ್ಳುಕೊಚ್ಚಿಗೆ ತಲುಪುವಾಗ್ಗೆ ಕರಿಕೆ ಕಡೆಯಿಂದ ನಾಲ್ಕು ವ್ಯಕ್ತಿಗಳು ಸ್ವಿಪ್ಟ್ ಕಾರಿನಲ್ಲಿ ಬಂದು  ಬಸ್ಸ ನ್ನು ಅಡ್ಡಗಟ್ಟಿ ಕಾರಿಗೆ ದಾರಿಬಿಟ್ಟಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಹೋಗಿದ್ದು, ನಂತರ ರಾತ್ರಿ 9-10 ಗಂಟೆಯ ಸಮಯದಲ್ಲಿ ಪಾರೆಷ್ಟ್ ಚೆಕ್ ಪೋಸ್ಟ್ ಬಳಿ ಬಸ್ ನ್ನು ತೊಳೆಯುತ್ತಿದ್ದಾಗ ಯಾರೋ ಇಬ್ಬರು ವ್ಯಕ್ತಿಗಳು ಹೀರೋ ಹೋಂಡಾ ಸ್ಕೂಟರಲ್ಲಿ ಬಂದು ಬಸ್ ಚಾಲಕ ಬಿ. ರಾಜಶೇಕರ ರವರ ಮೇಲೆ  ಹಲ್ಲೆ ಮಾಡಿದ್ದು  ಅಲ್ಲದೆ ಪ್ಯಾಂಟಿನ ಜೇಬಿನಿಂದ ರೂ.1850/-ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದು ಮತ್ತೆ 20 ನಿಮಿಷಗಳ ಬಳಿಕ 10-15 ಜನರ ಗುಂಪನ್ನು ಕಟ್ಟಿಕೊಂಡು ಬಂದು ಹಲ್ಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟಿಗೆ ವ್ಯಾನ್ ಡಿಕ್ಕಿ ಮೂವರಿಗೆ ಗಾಯ

ಮಡಿಕೇರಿ ತಾಲೋಕು ಎಮ್ಮೆಮಾಡು ಗ್ರಾಮದ ನಿವಾಸಿ ಸಿ.ಪಿ.ಹಂಸ ಎಂಬವರು ತಮ್ಮ ಸೊಸೆ ಮಿಶ್ರೀತಾ  ಆಕೆಯ 11 ತಿಂಗಳ ಹೆಣ್ಣು ಯೊಂದಿಗೆ ವಿರಾಜಪೇಟೆ ಸಮೀಪದ ಕೊಮ್ಮೆತೋಡು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮಾರುತಿ ವ್ಯಾನ್ ಡಿಕ್ಕಿಯಾದ ಪರಿಣಾಮ ಮೂವರು ಸ್ಕೂಟಿಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ಇಬ್ಬರ ದುರ್ಮರಣ

    ಸೋಮವಾರಪೇಟೆ ತಾಲೋಕು ಬಿಳಿಗೇರಿ ಗ್ರಾಮದ ಮಾದಪುರ ನಿವಾಸಿ ಬಿ.ಸಿ. ಮೊಣ್ಣಪ್ಪ ಎಂಬವರ ತಮ್ಮ ಬಿ.ಸಿ. ನಂಜಪ್ಪ ಎಂಬವರು ತಮ್ಮ ಕುಟುಂಬದವರೊಂದಿಗೆ ತಮ್ಮ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಿ.ಸಿ. ಮೊಣ್ಣಪ್ಪನವರ ಮಗ 11 ವರ್ಷದ ನಿರೋಸ್ ಎಂಬವನು ತೋಟದ ಪಕ್ಕದಲ್ಲಿದ್ದ ನಂದಿಮೊಟ್ಟೆ  ಹೊಳಗೆ ಕೈಕಾಲು ತೊಳೆಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು ಆತನನ್ನು ರಕ್ಷಿಸಲು ಹೋದ ಬಿ.ಸಿ. ನಂಜಪ್ಪನವರು ಸಹ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಈ ಸಂಬಂಧ ಸೋಮವಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಕೈಗೊಂಡಿದ್ದಾರೆ.

Last Updated: 26-10-2020 12:52 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080